ಕುಂಜಾರ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಕಬಂಧ ಚಿತ್ರಕ್ಕೆ ರಾಜರಾಜೇಶ್ವರಿ ನಗರದಲ್ಲಿರುವ ಟಾಪ್ಸ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.
ಕೆಲವು ವರ್ಷಗಳ ಹಿಂದೆ ನಡೆದ ಪ್ರಕರಣ ರಾಜ್ಯಾದ್ಯಂತ ಭಯಹುಟ್ಟಿಸಿತ್ತು. ಇದರ ಜೊತೆಗೆ ಹಾರರ್ ರೂಪದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸತ್ಯನಾಥ್ ಈ ಚಿತ್ರದ ನಿರ್ದೇಶಕರು. ವಿಷ್ಣುಪ್ರಸಾದ್ ಛಾಯಾಗ್ರಹಣ. ಸತ್ಯಜಿತ್ ಸಿದ್ದಕಾಂತ್, ಸಂಗೀತ-ಸಾನಿತೇಜ್, ಚಿತ್ರವನ್ನು ದಾವಣೆಗೆರೆ, ತುಮಕೂರು ಮುಂಥಾದೆಡೆಗಳಲ್ಲಿ ೪೦ ದಿನ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕೆ ಸಾಹಿತ್ಯ - ಕೆ.ಕಲ್ಯಾಣ್, ತಾರಾಗಣದಲ್ಲಿ ಪ್ರಸಾದ್ ವಶಿಷ್ಠ, ಪ್ರಿಯಾಂಕ ಮಲ್ಲಾದಿ, ಕಿಶೋರ್ ಕುಮಾರ್, ಅವಿನಾಶ್, ನಿರ್ದೇಶಕ ಯೋಗರಾಜಭಟ್, ವಂದನ, ವಚನ, ವಿಶಾಲ್, ನಾಗಾರ್ಜುನ ಸ್ವಾಮಿ, ಚಂದ್ರು, ಛಾಯಾಶ್ರೀ, ಪ್ರಶಾಂತ್ ಸಿದ್ಧಿ, ಮುಂತಾದವರು ಅಭಿನಯಿಸಿದ್ದಾರೆ.